Buttons


ಪ್ರತಿ ದಿನದ ಹೊಸ ಮಾಹಿತಿಗಾಗಿ ನಮ್ಮ ಗುಂಪುಗಳಿಗೆ ಸೇರಿ      Samagra Maahiti

Monday, January 22, 2024

ಹುರುಳಿ ಕಾಳು ಹಲವಾರು ಕಾಯಿಲೆಗಳಿಗೆ ಔಷಧಿ!

   

ಹುರುಳಿ ಕಾಳು ಹಲವಾರು ಕಾಯಿಲೆಗಳಿಗೆ  ಔಷಧಿ!



✍️ ಹುರುಳಿಕಾಳು   👇               ‌                 ‌            ‌       ‌     ‌                                        ‌             ‌                                             

ಹುರುಳಿಕಾಳು ಯಾವ ಯಾವ ಕಾಯಿಲೆಗಳನ್ನು ಗುಣಪಡಿಸುತ್ತದೆ ಎನ್ನೋದನ್ನು ತಿಳಿದುಕೊಂಡರೆ ಆಶ್ಚರ್ಯಪಡ್ತೀರಾ!


ಹುರುಳಿಕಾಳು ಸಾಕಷ್ಟು ಪೌಷ್ಠಿಕಾಂಶ ಹೊಂದಿರುವ ದ್ವಿದಳ ಧಾನ್ಯವಾಗಿದ್ದು, ಇದು ಅನೇಕ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಇದನ್ನು ಸೂಪ್, ಸಾರು, ಸಲಾಡ್ ಹೀಗೆ ಹಲವಾರು ರೀತಿಯಲ್ಲಿ ಸೇವಿಸಬಹುದು.


✍️ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕ 👇

ನಾವು ಹುರುಳಿಕಾಳಿನ ಬಗ್ಗೆ ತಿಳಿದುಕೊಳ್ಳಬೇಕಾದ್ದು ಬಹಳಷ್ಟಿದೆ. ಏಕೆಂದರೆ ಹುರುಳಿಕಾಳು ಮಧುಮೇಹ, ಹೃದ್ರೋಗ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಬೊಜ್ಜು, ಶೀತ ಮತ್ತು ಇನ್ನಿತರ ಕಾಯಿಲೆಗಳಿಗೆ ಸಾಂಪ್ರದಾಯಿಕ ಔಷಧಿಯಾಗಿದೆ. ಹುರುಳಿಕಾಳಿನಲ್ಲಿ ಪ್ರೋಟೀನ್ ಸಮೃದ್ಧವಾಗಿದೆ, ಕ್ಯಾಲ್ಸಿಯಂ ಅಧಿಕವಾಗಿದೆ, ಕಡಿಮೆ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿದೆ.


✍️ ದೇಹದಲ್ಲಿ ಶಾಖ ಮತ್ತು ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ 👇

ಸಾಮಾನ್ಯವಾಗಿ ಆರೋಗ್ಯದ ಬಗ್ಗೆ ಕಾಳಜಿ ಮಾಡುವ ಪ್ರತಿಯೊಬ್ಬರೂ, ಹುರುಳಿಕಾಳನ್ನು ತಮ್ಮ ಆಹಾರದಲ್ಲಿ ಸೇರಿಸುವುದನ್ನು ಮರೆಯುವುದಿಲ್ಲ. ಹುರುಳಿಕಾಳನ್ನು ವಿಶೇಷವಾಗಿ ಸೂಪ್ ರೂಪದಲ್ಲಿ ಸೇವಿಸಿದರೆ ದೇಹದಲ್ಲಿ ಶಾಖ ಮತ್ತು ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಶೀತ ವಾತವರಣದಲ್ಲಿ ಇದು ನಿಮ್ಮನ್ನು ಬೆಚ್ಚಗಿರಿಸುತ್ತದೆ.ಪ್ರೋ


✍️ ಟೀನ್ ಭರಿತ ದ್ವಿದಳ ಧಾನ್ಯ  👇

ಹುರುಳಿಕಾಳು ಕುದುರೆಗಳು ಮತ್ತು ಜಾನುವಾರುಗಳಿಗೆ ಪ್ರಧಾನ ಆಹಾರವಾಗಿ ಬಳಕೆಯಾಗುತ್ತಿತ್ತು. ಅದರ ಬಳಕೆಯಿಂದಲೇ ಹುರುಳಿಕಾಳು ಹಾರ್ಸ್ ಗ್ರಾಂ ಎಂಬ ಇಂಗ್ಲೀಷ್ ಹೆಸರನ್ನು ಪಡೆದುಕೊಂಡಿತು. ಇದನ್ನು ವಿವಿಧ ಪ್ರದೇಶಗಳಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಇದನ್ನು ತೆಲುಗಿನಲ್ಲಿ ಉವಾಲು, ಹಿಂದಿಯಲ್ಲಿ ಕುಲ್ತಿ, ತಮಿಳಿನಲ್ಲಿ ಕೊಲ್ಲು ಎಂದು ಕರೆಯುತ್ತಾರೆ. ಹುರುಳಿಕಾಳನ್ನು ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ ಮತ್ತು ಸೇವಿಸಲಾಗುತ್ತದೆ.


ಅಂದ ಹಾಗೆ ಇಲ್ಲಿ ಹುರುಳಿಕಾಳು ಯಾವೆಲ್ಲಾ ಕಾಯಿಲೆಗಳಿಗೆ ದಿವ್ಯಔಷಧವಾಗಿದೆ ನೋಡೋಣ ಬನ್ನಿ.


 👉 ಇನ್ಸುಲಿನ್ ಪ್ರತಿರೋಧ ಕಡಿಮೆ ಮಾಡುತ್ತದೆ 👇

ಸಂಸ್ಕರಿಸದ ಹಸಿ ಹುರುಳಿಕಾಳು ಬೀಜಗಳು ಹೈಪರ್ಗ್ಲೈಸೆಮಿಕ್ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದಲ್ಲದೆ, ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.



👉ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ದಕ್ಷಿಣ ಭಾರತದಲ್ಲಿ ಬಡವನ ನಾಡಿ ಬೆಳೆ ಎಂದು ಬಣ್ಣಿಸಲ್ಪಟ್ಟಿರುವ ಇದು ಆಂಟಿ-ಆಕ್ಸಿಡೆಂಟ್ ಸಮೃದ್ಧವಾಗಿರುವ ಧಾನ್ಯ. ಆಂಟಿ-ಆಕ್ಸಿಡೆಂಟ್‌ಗಳು ಸ್ವತಂತ್ರ ರಾಡಿಕಲ್ಸ್ ಅನ್ನು ಸ್ಕ್ಯಾವೆಂಜ್ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


                                                                      

👉 ಉತ್ಕರ್ಷಣ ನಿರೋಧಕಗಳಿಂದ ತುಂಬಿದೆ 👇

ಹುರುಳಿ ಕಾಳು ಬೀಜಗಳಲ್ಲಿ ಪಾಲಿಫಿನಾಲ್’ಗಳು, ಫ್ಲೇವನಾಯ್ಡ್’ಗಳು ಮತ್ತು ಪ್ರೋಟೀನ್ ಸಮೃದ್ಧವಾಗಿದೆ. ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿಯಲ್ಲಿ ಪ್ರಕಟವಾದ ಲೇಖನದಲ್ಲಿ, ಮೈಸೂರಿನ ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್’ನ ಧಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಂಶೋಧಕರು ಹುರುಳಿ ಕಾಳಿನಲ್ಲಿ ಹೇರಳವಾಗಿ ಉತ್ಕರ್ಷಣ ನಿರೋಧಕ ಇರುವುದುನ್ನು ಗುರುತಿಸಿದ್ದಾರೆ.


 ‌                                                                                       ✍️ ಮೂತ್ರ ವಿಸರ್ಜನೆಗೆ ಸಹಾಯ ಮಾಡುತ್ತದೆ 👇

ಆಯುರ್ವೇದದಲ್ಲಿ, ಹುರುಳಿ ಕಾಳು ಪ್ರಸಿದ್ಧ ಮೂತ್ರವರ್ಧಕವಾಗಿದೆ ಮತ್ತು ಮೂತ್ರದ ಹರಿವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಹೆಸರುವಾಸಿಯಾಗಿದೆ. ಈ ಸಮಸ್ಯೆ ಇರುವವರು ಉತ್ತಮ ಫಲಿತಾಂಶಗಳನ್ನು ಪಡೆಯಲು ಹುರುಳಿ ಕಾಳು ಸೂಪ್ ಅನ್ನು ನಾಲ್ಕು ವಾರಗಳವರೆಗೆ ದಿನಕ್ಕೆ ಎರಡು ಬಾರಿ ಸೇವಿಸಬಹುದು.


👉  ಮೂತ್ರಪಿಂಡದ ಕಲ್ಲುಗಳನ್ನು ತೆಗೆಯುತ್ತದೆ 👇

ಮೂತ್ರವರ್ಧಕ ಗುಣಲಕ್ಷಣಗಳನ್ನು ಹೊಂದಿರುವ ಹುರುಳಿಕಾಳು ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಇದಲ್ಲದೆ, ಹುರುಳಿಕಾಳನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಮೂತ್ರಪಿಂಡಗಳಲ್ಲಿ ಕಲ್ಲುಗಳ ರಚನೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ, ಏಕೆಂದರೆ ಹುರುಳಿ ಕಾಳು ಈ ಕಲ್ಲುಗಳನ್ನು ಕರಗುವಂತೆ ಮಾಡುವ ಕೆಲವು ಸಂಯುಕ್ತಗಳನ್ನು ಹೊಂದಿದೆ.


👉 ಹುಣ್ಣುಗಳನ್ನು ಗುಣಪಡಿಸುತ್ತದೆ 👇

ಫೈಟೊಸ್ಟೆರಾಲ್ ಎಸ್ಟರ್’ಗಳು ಇರುವುದರಿಂದ ಹುರುಳಿ ಕಾಳಿನಲ್ಲಿರುವ ಲಿಪಿಡ್ಸ್ ಅಲ್ಸರ್ ವಿರೋಧಿ ಚಟುವಟಿಕೆಯನ್ನು ಹೊಂದಿವೆ ಎಂದು ತೋರಿಸಲಾಗಿದೆ. ಪೆಪ್ಟಿಕ್ ಮತ್ತು ಬಾಯಿ ಹುಣ್ಣುಗಳನ್ನು ಗುಣಪಡಿಸುವಲ್ಲಿ ಹುರುಳಿ ಕಾಳು ಹೆಚ್ಚು ಪ್ರಯೋಜನಕಾರಿ ಎಂದು ಲಂಡನ್‌’ನ ರಾಯಲ್ ಫ್ರೀ ಮತ್ತು ಯೂನಿವರ್ಸಿಟಿ ಕಾಲೇಜ್ ಮೆಡಿಕಲ್ ಸ್ಕೂಲ್‌ನ ಶಸ್ತ್ರಚಿಕಿತ್ಸಾ ವಿಭಾಗದ ಸಂಶೋಧಕರು ಕಂಡುಕೊಂಡಿದ್ದಾರೆ.


ಅಸ್ತಮಾಗೆ ಅತ್ಯುತ್ತಮ ಮೆಡಿಸಿನ್ 👇👇

ಆಸ್ತಮಾ ರೋಗಿಗಳಿಗೆ ಸಾಮಾನ್ಯ ಆಯುರ್ವೇದ ಪ್ರಿಸ್ಕ್ರಿಪ್ಷನ್ ಎಂದರೆ ಬೇಯಿಸಿದ ಹುರುಳಿಕಾಳು ಮತ್ತು ಕಾಳುಮೆಣಸನ್ನು ಸೇವಿಸುವುದು. ಇದು ಕೆಮ್ಮು, ಶೀತ ಮತ್ತು ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಅಸ್ತಮಾಗೆ ಪರಿಹಾರವಲ್ಲವಾದರೂ, ತಕ್ಷಣದ ಪರಿಹಾರವನ್ನು ನೀಡುತ್ತದೆ ಮತ್ತು ಉಸಿರಾಟದ ಸಮಸ್ಯೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ತಿಳಿದುಬಂದಿದೆ.

                                                                                                                                                                  

✍️ ಹೃದಯದ ಆರೋಗ್ಯ ಕಾಪಾಡಲು 👇

ಕೆಲವು ಅಧ್ಯಯನಗಳು ಹುರುಳಿಕಾಳು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದ ಹಲವಾರು ಅಪಾಯಕಾರಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸಿವೆ. ಹಸಿ ಹುರುಳಿಕಾಳು ವಿಶೇಷವಾಗಿ ಆಂಟಿ ಆಕ್ಸಿಡೆಂಟ್‌ಗಳಾದ ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಕೊಬ್ಬಿನಂಶ ಕಡಿಮೆ ಮತ್ತು ಕಾರ್ಬೋಹೈಡ್ರೇಟ್ ಅಂಶವನ್ನು ಹೆಚ್ಚು ಹೊಂದಿದೆ, ಇದು ಹೃದಯದ ಆರೋಗ್ಯಕ್ಕೆ ಬಹಳ ಒಳ್ಳೆಯದು.

                                                                                             ಸಾಮಾನ್ಯವಾಗಿ ಹುರುಳಿ ಕಾಳಿನ ಸಾರು, ಪಲ್ಯ, ಚಟ್ನಿ ರುಚಿ ಹೇಗಿರುತ್ತದೆ ಅಂತ ಸವಿದು ತಿಳಿದಿರುತ್ತೀರಾ. ಆದರೆ ಹುರುಳಿ ಕಾಳಿನಿಂದ ಟೀ ಕೂಡ ಮಾಡುವ ವಿಚಾರ ಕೆಲವರಿಗೆ ಗೊತ್ತಿರಲ್ಲ. ಅಷ್ಟೇ ಅಲ್ಲದೆ ಈ ವಿಶೇಷ ಹುರುಳಿ ಟೀ ಹರ್ಬಲ್ ಟೀ ರೀತಿಯೇ ಆರೋಗ್ಯಕರವಾಗಿದ್ದು, ಹುರುಳಿ ಕಾಳು ಅಥವಾ ಹುರುಳಿ ಎಲೆಯಿಂದಲೂ ಟೀ ತಯಾರಿಸಿ ಸವಿಯಬಹುದಾಗಿದೆ.


ಹುರುಳಿ ಟೀ ಸೇವನೆ ಮಾಡುವುದರಿಂದ ಅನೇಕ ಆರೋಗ್ಯಕರ ಲಾಭವಿದೆ. ಇದು ಮಹುಮೇಹ ನಿಯಂತ್ರಿಸುತ್ತದೆ, ತೂಕ ಇಳಿಸುತ್ತದೆ, ಕಿಡ್ನಿ ಸಮಸ್ಯ ನಿವಾರಿಸಲು ಮದ್ದಾಗಿ ಕೆಲಸ ಮಾಡುತ್ತದೆ, ಹೃದಯದ ಆರೋಗ್ಯ, ಜೀರ್ಣ ಶಕ್ತಿ ವೃದ್ಧಿಸುತ್ತದೆ. ಇದರಲ್ಲಿರುವ ಫ್ಲೇವೋನಾಯ್ಡ್ ಅಂಶ ಆರೋಗಕ್ಕೆ ತುಂಬಾ ಒಳ್ಳೆಯದಾಗಿದೆ.


ಹುರುಳಿ ಟೀ ಮಾಡಲು ಬೇಕಾದ ಸಾಮಾಗ್ರಿ

ನೀರು- 3 ಕಪ್

ಹುರುಳಿ ಕಾಳು- 2 ಚಮಚ

ಜೇನು ತುಪ್ಪ- 1 ಚಮಚ


ಮಾಡುವ ವಿಧಾನ: 👇

ಮೊದಲು ಸ್ಟವ್ ಹಚ್ಚಿ ಒಂದು ತವಾದಲ್ಲಿ ಹುರುಳಿ ಕಾಳುಗಳನ್ನು ಹುರಿದುಕೊಂಡು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ. ಬಳಿಕ ಚಹಾ ತಯಾರಿಸಲು ಪಾತ್ರೆಯಲ್ಲಿ ನೀರು ಕುದಿಯಲು ಇಡಿ.

ಬಳಿಕ ಕುದಿಯುತ್ತಿರುವ ನೀರಿಗೆ ಹುರಿಡಿಟ್ಟುಕೊಂಡ ಹುರುಳಿ ಕಾಳನ್ನು ಹಾಕಿ 1ರಿಂದ 3 ನಿಮಿಷ ಕುದಿಯಲು ಬಿಡಿ. ಬೇಕಾದರೆ ಹುರಿದ ಹುರುಳಿ ಕಾಳನ್ನು ಪುಡಿ ಮಾಡಿ ಕೂಡ ಚಹಾ ತಯಾರಿಸಬಹುದು. ಅಷ್ಟೇ ಅಲ್ಲದೆ ಹುರುಳಿ ಎಲೆಗಳನ್ನು ಒಣಗಿಸಿ, ಪುಡಿ ಮಾಡಿ ಅದನ್ನು ಕೂಡ ಚಹಾ ಮಾಡಲು ಬಳಸಬಹುದು.

ಬಳಿಕ ಹುರುಳಿ ಕಾಳಿನ ಅಂಶ ನೀರಿನಲ್ಲಿ ಬೆರೆತ ಬಳಿಕ ಸ್ಟವನ್ನು ಆಫ್ ಮಾಡಿ. ಲೋಟದಲ್ಲಿ ಚಹಾ ಸೋಸಿ ಕುಡಿಯಿರಿ. ಈ ಚಹಾವನ್ನು ಹಾಗೆ ಕುಡಿಯಬಹುದು, ಇಲ್ಲವಾದರೇ ಇದಕ್ಕೆ ಸ್ವಲ್ಪ ಜೇನು ತುಪ್ಪ ಬೆರೆಸಿ ಸೇವಿಸಬಹುದು.


 ‌ ಆರೋಗ್ಯದ ಲಾಭಗಳು        


 👉ಕಿಡ್ನಿ ಸಮಸ್ಯೆಗೆ ಮದ್ದು👇

ಹುರುಳಿ ಕಾಳಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಹಾಗೂ ರುಟಿನ್ ಅಂಶ ಕಿಡ್ನಿ ಸಮಸ್ಯೆಗೆ ರಾಮಬಾಣ. ಪ್ರತಿನಿತ್ಯ ಹುರುಳಿ ಟೀ ಸೇವನೆ ಮಾಡಿದರೆ ಕಿಡ್ನಿ ಸಮಸ್ಯೆ ನಿಧಾನವಾಗಿ ಗುಣವಾಗುತ್ತದೆ.



👉ಮಧುಮೇಹ ನಿಯಂತ್ರಣಕ್ಕೆ ಸಹಕಾರಿ👇

ಮಧುಮೇಹಿಗಳು ಹುರುಳಿ ಟೀ ಕುಡಿದರೆ ಅವರ ದೇಹದಲ್ಲಿ ಸಕ್ಕರೆಯಂಶವನ್ನು ಅದು ನಿಯಂತ್ರಿಸುತ್ತದೆ. ಈ ಟೀ ರಕ್ತದಲ್ಲಿ ಗ್ಲೂಕೋಸ್ ಪ್ರಮಾಣವನ್ನು ಕಾಪಾಡಿ, ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಯುತ್ತದೆ.



👉 ಹೃದಯದ ಆರೋಗ್ಯಕ್ಕೆ ಉತ್ತಮ👇

ಹುರುಳಿ ಟೀ ಪ್ರತಿದಿನ ಕುಡಿಯುವುದರಿಂದ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಇದರಲ್ಲಿ ಫ್ಲೇವೋನಾಯ್ಡ್ ಅಂಶವಿರುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ಇದು ತಡೆಗಟ್ಟುತ್ತದೆ. ಪಾಶ್ರ್ವವಾಯು, ಹೃದಯಾಘಾತ ಆಗದಂತೆ ನೋಡಿಕೊಳ್ಳುತ್ತದೆ.



👉 ಜೀರ್ಣಕ್ರಿಯೆಗೆ ಒಳ್ಳೆಯದು👇

ಹುರುಳಿ ಕಾಳಿನಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುವಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಆಗಾಗ ಹೊಟ್ಟೆ ಉಬ್ಬುವ ಸಮಸ್ಯೆ ಇರುವವರು ಹುರುಳಿ ಟೀ ಸೇವಿಸಿದರೆ ಒಳ್ಳೆಯದು.



👉 ತೂಕ ಇಳಿಸುತ್ತದೆ👇

ಹುರುಳಿಕಾಳು ತೂಕ ಇಳಿಕೆಯಲ್ಲಿ ಉತ್ತಮ ಕಾರ್ಯ ನಿರ್ವಸುತ್ತದೆ. ಇದರಲ್ಲಿ ಕಡಿಮೆ ಕ್ಯಾಲೋರಿ ಅಧಿಕ ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಮೆಟಬಾಲಿಸಂ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ನೀರಿನ ಅಂಶ ಹೆಚ್ಚಿಸಿ ಬೇಡದ ಪೌಂಡ್ಸ್ ಗಳನ್ನು ನಾಶ ಮಾಡುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ.



👉 ಕ್ಯಾನ್ಸರ್ ತಡೆಗಟ್ಟುತ್ತದೆ👇

ಹುರುಳಿ ಕಾಳಿನಲ್ಲಿರುವ ರುಟಿನ್ ಅಂಶ ಇರುತ್ತದೆ. ಈ ರುಟಿನ್ ಅಂಶ ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಫ್ಲೇವೋನಾಯ್ಡ್ ಅಂಶವಿರುವ ಆಹಾರ ಸೇವಿಸುವುದರಿಂದ ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಕಿಡ್ನಿ, ಗರ್ಭಕೋಶದ ಕ್ಯಾನ್ಸರ್ ಮುಂತಾದ ಕಾಯಿಲೆಗಳು ಬರುವುದಿಲ್ಲ.



No comments:

Post a Comment